ಭಾನುವಾರ, ಫೆಬ್ರವರಿ 14, 2016

ನಮಗೇಕೆ



ನಿನ್ನೊಡನೆ ನಡೆವಾಗ ದೂರ ತೀರದ ಯೋಚನೆ ನನಗೇಕೆ
ನೀನು ನನ್ನಲ್ಲಿ ನುಡಿವಾಗ ಅನ್ಯರ ಆಲೋಚನೆ ನನಗೇಕೆ
ನಾನು ನಿನಗಾಗಿ ಇರುವಾಗ ಕಷ್ಟದ ಅರಿವು ನಿನಗೇಕೆ
ನನ್ನ ಪ್ರೀತಿಯು ಇರುವಾಗ ಲೋಕದ ಭಯವು ನಿನಗೇಕೆ
ಬೆರೆಯವರ ಬೇಡದ ಗಮನ ನಮಗೇಕೆ,
ನನಗೆ ನೀನು ನಿನಗೆ ನಾನಿರುವಾಗ...


ಶುಕ್ರವಾರ, ಫೆಬ್ರವರಿ 12, 2016

ಗೆದ್ದ ಯೋಧ



ಬೀಸುವ ಹಿಮಗಾಳಿ ತಂದಿರಲು ಮರಗಟ್ಟಿಸುವ ಚಳಿ
ಬರಲು ಇಚ್ಛಿಸಿದ ಜವರಾಯ ನಿಮ್ಮ ಬಳಿ

ಶತ್ರುಗಳ ಹುಟ್ಟುಗಿಸುವ ನಿಮ್ಮಲ್ಲಿತ್ತು ಬದುಕನು ಜಯಿಸುವ ಕೆಚ್ಚು
ನಿಮ್ಮ ಸಾಹಸ ಕಂಡ ವಿಧಿಗೂ ಆಗಿರಬೇಕು ಹೊಟ್ಟೆ ಕಿಚ್ಚು

ನಿಮ್ಮ ಅಗಲಿಕೆಗೆ ಮರುಗಿವೆ ಹೃದಯಗಳು ನಮ್ಮೆಲ್ಲರ
ನಮಗೆಲ್ಲರಿಗೂ ಸ್ಪೂರ್ತಿಯ ಸೆಲೆಯಾದ ನೀವು ಅಜರಾಮರ

ಶುಕ್ರವಾರ, ಜನವರಿ 01, 2016

೨೦೧೬ನೆ ಇಸವಿ



ಈ ಹೊಸ ವರ್ಷದಲ್ಲಿ...

ಯಶ ಸಂಪತ್ತುಗಳ ಮೀರಿದ್ದಾಗಲಿ ನಿಮ್ಮ ನೆಮ್ಮದಿ,
ಆಗಲಿ ನಿಮ್ಮ ಮನೆ-ಮನಸ್ಸು ಸುಖ-ಸಂತಸಗಳ ಸನ್ನಿಧಿ,
ನಿಮ್ಮ ಬಾಳಾಗಲಿ ನೆನಪಿನಲ್ಲಿಡುವಂತಹ ಸುಂದರ ತ್ರಿಪದಿ.

೨೦೧೬ನೆ ಇಸವಿಯ ಹಾರ್ದಿಕ ಶುಭಾಶಯಗಳು

ಬುಧವಾರ, ಡಿಸೆಂಬರ್ 30, 2015

ತತ್ವ



ಜಗತ್ತೇ ಹೀಗೆ, ಕಣ್ಣ ಮುಂದಿರುವವರೆಗು ನಿನ್ನ ಅಸ್ತಿತ್ವ
ಮರೆಯಾದರೆ ನಿನಗೆ ತಿಳುವುದು ಬದುಕಿನ ತತ್ವ

ನೆಮ್ಮದಿಯುಂಟು ಮರೆತುಬಿಡೆ ನಿನ್ನದಲ್ಲದ ಜಗತ್ತನ್ನು
ಜಯವುಂಟು, ಅರಿತು ಮುನ್ನಡೆ ನಿಲ್ಲದೆ ಯಾರಿಗೂ ನೀನಿನ್ನು.

ಸೋಮವಾರ, ಡಿಸೆಂಬರ್ 28, 2015

ಹೊಸತನ



ನೂರಾರು ಆಲೋಚನೆಗಳಿದ್ದರೂ ಅದೇಕೊ
ನಿನ್ನ ನೋಡುವ ಬಯಕೆಗೆ ಕಾಡಿದೆ ಓಂಟಿತನ||

ಒಂಟಿತನದ ತಪ್ಪಿಲ್ಲದಿದ್ದರೂ ಇಂದೇಕೊ
ಪ್ರೀತಿಗೆ ಸೋತ ಮನಸು ಕಳೆದುಕೊಂಡಿದೆ ತನ್ನತನ||

ಇದೆಲ್ಲದರ ಅರಿವಿದ್ದರೂ ನನಲ್ಲೇಕೋ
ಮೂಡಿದ ಕನಸುಗಳು ತಂದಿವೆ ನನ್ನಲ್ಲಿ ಮತ್ತೆ ಹೊಸತನ||

ಭಾನುವಾರ, ನವೆಂಬರ್ 01, 2015

ತಾಯಿಯ ನಮಿಸು



ನೀ...

ಸುಂದರ ಪ್ರಕೃತಿ ನೀಡಿದ ಕನ್ನಡಾಂಬೆಯ ನಮಿಸು
ಕನ್ನಡ ತಾಯಿಯ ಮಕ್ಕಳ ತ್ಯಾಗವ ಸದಾ ಸ್ಮರಿಸು
ಎಲ್ಲಿದ್ದರೇನು ಕನ್ನಡವ ಮರೆಯದೆ ನಿತ್ಯ ಪಠಿಸು
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಎಂದು ಭಜಿಸು

ಸಮಸ್ತ ಕನ್ನಡ ಕುಲಕೋಟಿಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

ಸೋಮವಾರ, ಅಕ್ಟೋಬರ್ 19, 2015

ಚಿತ್ರಣ



ಬದುಕಾಗದಿರಲಿ ರಂಗು-ರಂಗಿನ ಮಳೆಬಿಲ್ಲಿನಂತೆ,
ಹತ್ತಿರ ಹೋದರೂ ಎಟುಕದು ಅದು ಕೈಗೆ.
ಬದುಕಾಗಲಿ ಬಿಳಿ ಹಾಳೆಗಳು ತುಂಬಿದ ಪುಸ್ತಕದಂತೆ,
ಮೂಡಲಿ ಅದರಲಿ ಚಿತ್ರಣ ನಾವು ಗೀಚಿದ ಹಾಗೆ.