ಸೋಮವಾರ, ನವೆಂಬರ್ 24, 2014

ಉತ್ತರ



ತಣ್ಣೀರ ಎರಚಿ ಆಸೆಗಳಿಗೆ
ದೂರ ಹೋದೆ ಬರಲಾರದೆ ನನ್ನ ಹತ್ತಿರ

ನಿನ್ನ ಅಗಲಿಕೆಯ ಪ್ರಶ್ನೆಗಳಿಗೆ
ಈಗ ನನ್ನದು ಬರಿಯ ಕಣ್ಣೀರಿನ ಉತ್ತರ.

ಶನಿವಾರ, ನವೆಂಬರ್ 01, 2014

ಕನ್ನಡದ ಕಂಪು



ಮೂಡಣದಿ ಹಳದಿಯ ಚಿತ್ತಾರ, ಪಡುವಣದಿ ಕೆಂಪಿನ ಚಿತ್ತಾರ
ಇದ ಪ್ರಕೃತಿಯೇ ಬಿಡಿಸಿರುವಳು ತನ್ನ ಕೈಯ್ಯಾರ||
ಪಸರಿಸುವ ಕನ್ನಡದ ಕಂಪನು ಅವಳ ಅನುಸಾರ
ಆಚರಿಸುವ ಕನ್ನಡಮ್ಮನ ಹಬ್ಬವ ತುಂಬು ಮನಸಾರ||

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು