ಬುಧವಾರ, ಜನವರಿ 26, 2011

ಕ್ಯಾನ್ಸರ್ - ಮಾರಿ

ಮುಗ್ಧ ಜನರನು ಏತಕೆ ಕಾರಣವಿಲ್ಲದೆ ನೀ ಕಾಡುವೆ,
ನಿನಗೆ ಮಾಡಲು ಬೇರೇನೂ ಕೆಲಸ ಇಲ್ಲವೆ?
ಇದ್ದಿದ್ದೇ ಆದರೆ ಏಕೆ ಹೀಗೆಲ್ಲ ನೀ ಮಾಡುವೆ.
ನಿನ್ನಿಂದ ಕೆಲವರ ಜೀವನದಲ್ಲಿ ಬರಿ ಕಣ್ಣೆರನ್ನೇ ನಾ ಕಾಣುವೆ,
ಇಗೋ ನಿನ್ನಲ್ಲಿ ನನ್ನ ಎರಡೂ ಕೈಗಳನ್ನು ಸೇರಿಸಿ ಬೇಡುವೆ,
ದಯವಿಟ್ಟು ಯಾರನ್ನೂ ಸಾಯಿಸಬೇಡ ಕ್ಯಾನ್ಸರ್ ಎಂಬ ಮಾರಿಯೇ...



ಶುಕ್ರವಾರ, ಜನವರಿ 21, 2011

ಬಕರ

ಮೊದಲು ಈರುಳ್ಳಿ, ಮತ್ತೆ ಈಗ ಏರಿಕೆ ಆಯಿತು ಪೆಟ್ರೋಲಿನ ದರ,
ಕೆಲವರೆಂದರು... ಇದು ಕಮಲದ ಕೈವಾಡ, ಇನ್ನು ಕೆಲವರ ಬಾಯಿ ತೆರಿಸಿತು ಕರ,
ದಣಿವಾಯಿತೇ ಹೊರತು ಪ್ರಯೋಜನಕ್ಕೆ ಬಾರಲಿಲ್ಲ ಜನರೆತ್ತಿದ ಜೋರು ಸ್ವರ,
ಬಡವರಿಗೆ ಆದರೆ ಇದು ಶಾಪ, ಮಧ್ಯವರ್ತಿಗಳಿಗೆ ದೇವರು ಕೊಟ್ಟ ವರ,
ಅದೇಕೋ ಹಿಡಿದಂತಿದೆ ನಮ್ಮೆಲ್ಲ "ನೆಚ್ಚಿನ" ಜನನಾಯಕರಿಗೆ ದೊಡ್ಡ ಗರ,
ಏನೇ ಆಗಲಿ ನಾವೆಲ್ಲ ಇವರೆಲ್ಲರ ಕೈಗಳಲ್ಲಿ "ಬಲಿಕಾ ಬಕರ" !!!
ಹರ ಹರ, ನೀನೆ ಕಾಪಾಡಬೇಕು ಶಂಭೋಶಂಕರ :)

ಶನಿವಾರ, ಜನವರಿ 15, 2011

ಎಳ್ಳು-ಬೆಲ್ಲ

ಕಹಿಯನ್ನು ಮರೆಯುತ ಒಳಿತನ್ನು ನೆನೆಯುವ,
ಒಳಿತನ್ನು ನೆನೆಯುತ ಸಂಕ್ರಾಂತಿ ಆಚರಿಸುವ,
ಸಂಕ್ರಾಂತಿಯ ಆಚರಿಸುತ ಎಳ್ಳು-ಬೆಲ್ಲವ ತಿನ್ನುವ,
ಎಳ್ಳು-ಬೆಲ್ಲ ತಿನ್ನುತ ಜೀವನದ ಕಹಿಯನ್ನು ಮರೆಯುವ!!!