ಶನಿವಾರ, ಜುಲೈ 30, 2011

ಜಗ್ಗಾಟ


ನಮ್ಮ ರಾಜ್ಯದ ಸಿ.ಎಂಗೆ ಮೇಲಿಂದ- ಮೇಲೆ ಸತ್ವ ಪರೀಕ್ಷೆಗಳು ಯಾಕೆ?
ಏಕೆಂದರೆ ಸದಾ ಕಾಲೆಳೆಯುತ್ತಾ ಇರುತ್ತಾರೆ ಸದ್ಯಕ್ಕೆ ಕೆಲಸವಿಲ್ಲದ ಎಚ್.ಡಿ.ಕೆ.
ಬಹುಶಃ, ಇವರಿಗೆ ಈ ನಡುವೆ ಸೆರಗೆಳೆಯಲು ಬಿಡುತಿಲ್ಲವೇನೊ "ರಾಧಿಕೆ"||

ಏನೇ ಆದರೂ ತಲೆ ಉರುಳಿದರೂ ಬಲು ಭಂಡ ಕಣ್ರಿ ನಮ್ಮ ರಾಜ್ಯದ ಸಿ.ಎಂ
ಇನ್ನೂ ನಡೆಸುತ್ತಲೇ ಇದ್ದಾರೆ ಕಸರತ್ತು, ಆಗಿಸಲು ತಮ್ಮ ಸಿ.ಎಂ ಹುದ್ದೆ ಖಾಯಂ
ಒಂದು ವೇಳೆ ಅದಾಗದ್ದಿದ್ದರೆ, ಆಗಬೇಕಂತೆ "ಡೆಪ್ಯುಟಿ ಸಿ.ಎಂ", ಶೋಭಾ ಮ್ಯಾಡಂ||

ಸದ್ಯಕ್ಕೆ ನಿಲ್ಲುವಂತಿಲ್ಲ ನಾವು ಆಯ್ಕೆ ಮಾಡಿರುವ ರಾಜಕಾರಣಿಗಳ ಕೆಸರೆರೆಚಾಟ
ಸಾರ್ವಜನಿಕರ ಪಾಡಂತೂ ಆಗಿಬಿಟ್ಟಿದೆ "ಇಲಿಗೆ ಸಂಕಟ - ಬೆಕ್ಕಿಗೆ ಚೆಲ್ಲಾಟ"
ಓ ದೇವರೆ, ಎಂದು ಮುಗಿಯುದೋ ತಿಳಿದಿಲ್ಲ ಇವರುಗಳ ಜಗ್ಗಾಟ||
ಆದಷ್ಟೂ ಬೇಗನೆ ಮುಗಿಸು!!!

ಭಾನುವಾರ, ಜುಲೈ 24, 2011

ಸೇರುವೆ!!!


ಮೋಡ ತೊರೆದು ಹನಿಯು ಭುವಿ ಸೇರಿದಂತೆ,
ಗೂಡ ತೊರೆದು ಹಕ್ಕಿಯು ಬಾನು ಸೇರಿದಂತೆ,
ನಾ ನಿನ್ನ ಸೇರುವೆ!!!

ಶುಕ್ರವಾರ, ಜುಲೈ 15, 2011

ಕವಿತೆ!!!


ನಿನ್ನ ನಗುವಿನಲಿ ನಾ ಸಂತಸದಿ ಬೆರೆತೆ,
ನಿನ್ನ ಚೆಲುವಿನಲಿ ನಾನಿಂದು ಕಲೆತೆ,
ನಿನ್ನ ಸನಿಹದಲಿ ನನ್ನೇ ನಾ ಮರೆತೆ,
ಏಕೆಂದರೆ ನೀನೆ ಅಲ್ಲವೆ ನನ್ನ ಬಾಳಿನ ಕವಿತೆ!!!

ಗುರುವಾರ, ಜುಲೈ 07, 2011

ಪ್ರತಿಬಿಂಬ!


ನೀನಿಲ್ಲದಿದ್ದರೂ...

ನಿನದೇ ನೆನಪು ನನಗೆ "ದಿನಪ್ರತಿ",
ಏಕೆಂದರೆ ನೀನೇ ಅಲ್ಲವೆ ಪ್ರೀತಿಯ "ಬಿಂಬ"||

ಆದರೆ
ಇಲ್ಲಿ "ದಿನ" ಕಳೆದಂತೆ ನನ್ನೊಳಗೆ ಬರೀ ನಿನ್ನದೆ ಪ್ರತಿಬಿಂಬ!!!