ಬುಧವಾರ, ಸೆಪ್ಟೆಂಬರ್ 28, 2011

ಬೆಳದಿಂಗಳು


ನಿನ್ನ ಮೊಗದಲ್ಲಿ ನಗುವಿಲ್ಲದಿರಲು, ನನ್ನ ಮನದಲ್ಲಿ ಅಮಾವಾಸೆಯ ಕತ್ತಲು,
ನಗು ಅರಳಲು, ಮನದಿ ಚೆಲ್ಲಿದ ಬೆಳದಿಂಗಳಲ್ಲಿ ನನ್ನ ಆಸೆಗಳೆಲ್ಲವೂ ಬೆತ್ತಲು||
ಕಂಗಾಲಾಗಿದ್ದ ನನ್ನ ಒಂಟಿ ಹೃದಯಕೆ ಆ ನಿನ್ನ ಕುಡಿ ನೋಟವು ಮುತ್ತಲು,
ಆ ಮುತ್ತಿನ ಮತ್ತಿಗೆ ಮರೆತೇ ಬಿಟ್ಟೆ ನಾ, ನನ್ನ ಸುತ್ತ-ಮುತ್ತಲು!!!

ಗುರುವಾರ, ಸೆಪ್ಟೆಂಬರ್ 22, 2011

ಶುಭೋದಯ


ಮನೆಯ ಅಂಗಳದಲ್ಲಿ ನೀರ ಮುತ್ತುಗಳು ಹರಡಿದ್ದವು,
ಆಗಸದಿ ಚಿಲಿಪಿಲಿ ಹಕ್ಕಿಗಳ ಸಾಲು ಹೊರಡಿದ್ದವು,
ಗಿಡ ಮರಗಳು ಬೆಳಕಿನ ಹೊದಿಕೆಯ ಹೊದ್ದಿದ್ದವು,
ಜಾನುವಾರುಗಳು ಚಿನ್ನದ ಕಿರಣಗಳಿಗೆ ಮೈ ಒಡ್ಡಿದ್ದವು,
ಮೂಡಣದಿಂದ ಸೂರ್ಯನ ರಶ್ಮಿಗಳು ಭೂಮಿಯ ತಲುಪಿದ್ದವು,
ಅಗೋ, ಹೊಸ ಚೈತನ್ಯದ ಹೊಸ ದಿನದ ಹೊಸ ಕ್ಷಣಗಳು ಶುರುವಾಗಿದ್ದವು!!!

ಮಂಗಳವಾರ, ಸೆಪ್ಟೆಂಬರ್ 20, 2011

ಅಮಲು



ನನ್ನನ್ನು ಕೆರಳಿಸಿತು ನೀ ನನಗೆ ಮೊದಲು ಕೊಟ್ಟ ಮುತ್ತಗಳ ಅಮಲು,
ಧೂಳೆದ್ದಿದ ನನ್ನ ಹೃದಯದಿ ಬರೀ ನಿನ್ನ ಪ್ರೀತಿಯದೇ ಘಮಲು||

ನೀ ನನ್ನ ಬಿಗಿದಪ್ಪಿನಂದಿನಿಂದ ನನ್ನಲ್ಲಿ ಮೂಡಿತು ಬಸಿರಿನ ಬಯಕೆ,
ನನ್ನ ಉಸಿರು, ಒಡಲ ಹಸಿರು ಎಲ್ಲವೂ ನೀ ಕೊಟ್ಟ ಪ್ರೀತಿಯ ಕಾಣಿಕೆ||

ಸದಾ ಹೀಗೇ ಸುರಿಯಬಾರದೇ ನಲ್ಲ!!!

"ಭೂಮಿ"ಯು "ಮಳೆರಾಯ"ನಿಗೆ ಈ ರೀತಿ ಹೇಳಬಹುದೇನೋ...

ಬುಧವಾರ, ಸೆಪ್ಟೆಂಬರ್ 14, 2011

ಕಂಬನಿ


ನೀ ನನ್ನ ಬಳಿ ಇರುವಾಗ ನನ್ನೆದೆಯಲ್ಲಿ ಹುಟ್ಟಿತು ಪ್ರೇಮವಾಹಿನಿ,
ನೀನಿಲ್ಲದಿದ್ದಾಗ ಹರಿಯುತ ಮೂಡಿಸಿತು ನನ್ನ ಕಣ್ಗಳಲಿ ಕಂಬನಿ||

ವಾಹಿನಿ ಹರಿದರೂ, ಕಂಬನಿ ಸುರಿದರೂ ನೀನೇ ನನ್ನ ಮಾನಿನಿ,
ಪ್ರೀತಿ ಅಮೃತವ ನೀಡಿ ನನ್ನ ಉಳಿಸು ಬಾ, ಬಾಳ ಸಂಜೀವಿನಿ||

ಶನಿವಾರ, ಸೆಪ್ಟೆಂಬರ್ 10, 2011

ಸಾಕು


ಅವನು:
ಚೆಲುವೆ,
ಕತ್ತಲೆಯ ಆಗಸದಲಿ ಚಂದಿರನು ಬೆಳಗಲು ಸೂರ್ಯನ ಬೆಳಕು ಬೇಕು,
ಅಂತೆಯೇ, ನನ್ನ ಬರಿದಾದ ಮನದಲಿ ಪ್ರೀತಿ ಅರಳಲು ನಿನ್ನ ನಗುವೊಂದು ಸಾಕು||

ಅವಳು:
ಚೆಲುವ,
ಕತ್ತಲೆಯ ಆಗಸದಲಿ ಚಂದಿರನು ಬೆಳಗಲು ಸೂರ್ಯನ ಬೆಳಕು ಬೇಕು.
ಆದರೆ, ನನ್ನ ಬರಿದಾದ "ಪರ್ಸ್" ತುಂಬಲು ನಿನ್ನ ಬಳಿ ದುಡ್ಡಿದ್ದರೆ ಸಾಕು!!!

ಗುರುವಾರ, ಸೆಪ್ಟೆಂಬರ್ 08, 2011

ಯಾರು???



ದಿಲ್ಲಿಯ ಜನ ಆಗ ತಾನೆ ತೆರೆಯಲು ಇದ್ದರು ತಮ್ಮ ದಿನಚರಿಯ ಪುಟ,
ಯಾರೂ ಊಹಿಸದೆ, ಯಾರೂ ಭಾವಿಸದೆ ಬಂದೆರಗಿತು ಬಾಂಬ್ ಸ್ಪೋಟ.

ಕೆಲವರದ್ದು ಮೌನವಾದರೆ, ಇನ್ನೂ ಕೆಲವರದ್ದು ಮುಗಿಲು ಮುಟ್ಟಿದ ಕಂಬನಿ,
ರಕ್ತದ ಹೊಳೆ ಹರಿದಲ್ಲಿ ಕಂಡಿದ್ದು ಕೆಂಪು ಸೂರ್ಯ, ಚೀರುವ ದನಿ.

ಜೀವ ಉಳಿದವರ ಕಣ್ಣುಗಳಲ್ಲಿ ಹೆಚ್ಚಾಗಿ ಮೂಡಿರಲು ಬದುಕುವ ಕನಸು,
ಕಣ್ಣು ಮುಚ್ಚಿದವರ ಪ್ರೀತಿಪಾತ್ರರಿಗೆ ಬದುಕು ನಡೆಸಲು ಎಲ್ಲಿಯ ಮನಸು.

ಮರುದಿನವೆ ಏನೂ ನಡೆದಂತೆ ಎಲ್ಲರೂ ತಮ್ಮ ಜೀವನದಲ್ಲಿ ಮಗ್ನರಾಗುವರು ,
ಹೀಗಾದರೆ ಎಗಿಲ್ಲದೆ ಸಾಗಿರುವೆ ಈ ಸಾವು-ನೋವಿಗೆ ಉತ್ತರ ಹೆಳುವವರು ಯಾರು???

ಮಂಗಳವಾರ, ಸೆಪ್ಟೆಂಬರ್ 06, 2011

ಭೂತ


ನಿನ್ನ ನೆನಪೆಂಬುದು ಈಗ ಕಾಡುವ ಭೂತ,
ಭೂತವೆಂಬುದಿಲ್ಲಿ ಕಾಲದ ಲೀಲೆಯೋ ಇಲ್ಲ ಕಾಣದಕೃತಿಯ ಸೆಲೆಯೋ?
ನಿನ್ನ ಜೊತೆ ಕಳೆದ ಕ್ಷಣಗಳೆಲ್ಲವೂ ಈಗ ಗತ,
ಗತವೆಂಬುದಿಲ್ಲಿ ಅಳಿಸಲಾಗದ ಕಲೆಯೋ ಇಲ್ಲ ಬಿಡಿಸಲಾಗದ ಬಲೆಯೋ?
ನಾ ಅರಿಯೆ!!!