
ನನ್ನನ್ನು ಕೆರಳಿಸಿತು ನೀ ನನಗೆ ಮೊದಲು ಕೊಟ್ಟ ಮುತ್ತಗಳ ಅಮಲು,
ಧೂಳೆದ್ದಿದ ನನ್ನ ಹೃದಯದಿ ಬರೀ ನಿನ್ನ ಪ್ರೀತಿಯದೇ ಘಮಲು||
ನೀ ನನ್ನ ಬಿಗಿದಪ್ಪಿನಂದಿನಿಂದ ನನ್ನಲ್ಲಿ ಮೂಡಿತು ಬಸಿರಿನ ಬಯಕೆ,
ನನ್ನ ಉಸಿರು, ಒಡಲ ಹಸಿರು ಎಲ್ಲವೂ ನೀ ಕೊಟ್ಟ ಪ್ರೀತಿಯ ಕಾಣಿಕೆ||
ಸದಾ ಹೀಗೇ ಸುರಿಯಬಾರದೇ ನಲ್ಲ!!!
"ಭೂಮಿ"ಯು "ಮಳೆರಾಯ"ನಿಗೆ ಈ ರೀತಿ ಹೇಳಬಹುದೇನೋ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ