
ನಮ್ಮ ಬಾಳಿನ ಪಥದಲ್ಲಿ ನಿನ್ನ ಕರುಣೆಯ ರಸವ ಹರಿಸು,
ನಿನ್ನ ಈ ಮಕ್ಕಳಿಗೆ ವಿಘ್ನಗಳು ಬಾರದಿರಲೆಂದು ಹರಸು||
ಹೇ ಗಜಮುಖ, ನಿನ್ನ ಕೃಪಾಕಟಾಕ್ಷದಿಂದ ನಮ್ಮ ಜೀವನ ಸುಮಧುರ,
ಕಷ್ಟಗಳನ್ನು ನಿವಾರಿಸುವ ನಿನಗೆ ನಿನ್ನೆಲ್ಲ ಭಕ್ತರಿಂದ, ಇಗೋ ಭಕ್ತಿಯ ಜೈಕಾರ||
ಎಲ್ಲರಿಗೂ ಗೌರಿ-ಗಣೇಶ ಶುಭಾಶಯಗಳು!!!
ಎಲ್ಲರಿಗು ನಾನು - ನನ್ನ ಮನಸ್ಸು ಮಾಡುವ ವಂದನೆಗಳು. ಈ ಮನಸ್ಸೆಂಬುದು "ಭಾವನೆಗಳಿಗೆ" ಹಿಡಿದ ಕನ್ನಡಿ ಮತ್ತು ಒಬ್ಬ ಮನುಷ್ಯನ ಗುಣಗಳಿಗೆ ಇರುವ ಕೈಪಿಡಿ. ವಿವಿಧ ಭಾವನೆಗಳಿಂದ ರೂಪಗೊಂಡವನೆ ಮನುಷ್ಯ. ಹಾಗಾಗಿ ಇಲ್ಲಿ "ನಾನು" ಎಂಬ ಪದದ ಅರ್ಥ "ಭಾವನೆ" ಎಂಬುದು. ಹೇಗೆ, ಕನ್ನಡಿಯಲ್ಲಿ ಅದರ ಮುಂದಿರುವ ವಸ್ತುವಿನ ಆಕಾರ ಮತ್ತು ಅದರ ಹಿಂದಿನ ವಸ್ತುಗಳು ಕಾಣುವುದೊ, ಹಾಗೆ ಈ ಮನಸ್ಸೆಂಬ ಕನ್ನಡಿಯಲ್ಲಿ ಕಾಣುವುದು ಭಾವನೆ ಮತ್ತು ಅದರ ಹಿಂದಿರುವ ನೆನಪುಗಳು ಮಾತ್ರ. ಹಾಗಾಗಿ ಇಲ್ಲಿ "ಭಾವಕನ್ನಡಿ" ಎಂಬುದರ ಅರ್ಥ "ಮನಸ್ಸು" ಎಂಬುದು!