ಶುಕ್ರವಾರ, ಫೆಬ್ರವರಿ 21, 2020

ಶಿವನಾರು...



ಲೋಕವ ರಕ್ಷಿಸಲು ಹಾಲಾಹಲವ ಕುಡಿದ ವಿಷಕಂಠ
ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸುವನು ಲಯಕಾರಕ ಭಗವಂತ||

ತಪಸ್ಸಿಗೆ ಕೂತರೆ ಅವನದ್ದು ಶಾಂತಿಯ ಸ್ವಭಾವ
ಮೂರನೆ ಕಣ್ಣನು ತೆರೆದರೆ ರುದ್ರನಾಗುವ ಮಹಾದೇವ||

ಶಕ್ತಿಯೊಡನೆ ಪ್ರಣಯ ನಾಟ್ಯವನ್ನಾಡಿದವನು ಅರ್ಧನಾರೀಶ್ವರ
ಪ್ರಳಯ ರುದ್ರ ತಾಂಡವನ್ನಾಡಿ ನಟರಾಜನಾದನು ಈಶ್ವರ||

ನಂಬಿದವರ ಕೈ ಬಿಡನು, ಇವನ ಮಹಿಮೆ ಅಪಾರ
ಸದಾ ತನ್ನ ಭಕ್ತರ ಜೊತೆಗಿರುವವನು ಶಂಭೋ ಶಂಕರ||

ಮಹಾಶಿವರಾತ್ರಿಯ ಹಾರ್ದಿಕ ಶುಭಾಶಯಗಳು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ