![](https://blogger.googleusercontent.com/img/b/R29vZ2xl/AVvXsEg5565AQJP9Ofc_ydA15K6bF4PN7xBCGYdyyTXMuElV7vYRRUmSE-KzW0gJcyb2yUFJRIb7tqyuwzuoruic8IbmJirJR88ctQJCU5giPwz-x-NLw6X2LDhvoiSfmNesHIyQIATpcQurcXA/s320/IMG027.jpg)
ದೂರದಿಂದ ನೋಡಿದೆ ಅಲ್ಲಿ, ನಿಂತಿದ್ದರು ನಾಲ್ವರು ಕುಳಿತಿದ್ದರು ಮಗದೊಬ್ಬರು,
ಆ ಮೂವರು ನಿಂತದ್ದು ಕಂಡಿತು ಅಶ್ವತ ಕಟ್ಟೆಯ ಮುಂದೆ ನಿಂತ ಭಕ್ತರ ಹಾಗೆ,
ಆಲದ ಮರದಂತಿದ್ದ ಕುಳಿತಿದ್ದವರ ಮಾತುಗಳ ಕೇಳುತ್ತ ಎಲ್ಲರು ಮಂತ್ರಮುಗ್ಧರು,
ಬಿಸಿಲಿನಿಂದ ಒಣಗಿದವಗೆ ನೆರಳು ಸಿಕ್ಕಂತಾಯಿತು ಅವರನ್ನು ನೋಡಿ ನನಗೆ.
ನಾನೂ ಅಲ್ಲಿಗೆ ಹೋಗಿ ಆ ಆಲದ ಮರಕ್ಕೆ ಭಕ್ತಿಯಿಂದ ಕೈ ಮುಗಿಯಬೇಕೆನಿಸಿತು,
ತಡಮಾಡಲಿಲ್ಲ ಒಂದು ಕ್ಷಣವು ಕೂಡ, ಹೋಗಿ ನಿಂತೆ ಆ ಪುಣ್ಯಾತ್ಮರ ಎದುರು,
ಮನದ ಮಾತಗಳನ್ನು ಪದಗಳಲಿ ಸೆರೆಹಿಡಿದ ಕೈ, ಕಾಲಿಗೆರಗಿದ ನನ್ನನು ಆಶೀರ್ವದಿಸಿತು,
ಆ ಕಣ್ಗಳಲಿ ಇನ್ನೂ ಬತ್ತದ ಉತ್ಸಾಹ, ಮಾತುಗಳಲ್ಲಿ ಕುಗ್ಗದ ಭಾವಗಳ ನವಿರು.
ಆ ಮರದಡಿಯಲ್ಲಿ ಯಾರೇ ನಿಂತರೂ ಮೂಡೂವುದು ಅವರಲ್ಲಿ ಕಾವ್ಯದ ಚಿಗುರು,
ಆಶಯವೊಂದೇ.. ಚಿರವಾಗಿರಲಿ ಆ ಮರವು, ಚಿರಂತನವಾಗಲಿ ಅದರ ಕೃತಿಗಳೆಂಬ ಬೇರು!!!
ನಿತ್ಯೋತ್ಸವದ ಮಹಾನ್ ಕವಿ ನಿಸಾರ್ ಅಹ್ಮದ್ ಅವರನ್ನು ಭೇಟಿ ಮಾಡಿದ ಸಂದರ್ಭ :)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ