ಎಲ್ಲರಿಗು ನಾನು - ನನ್ನ ಮನಸ್ಸು ಮಾಡುವ ವಂದನೆಗಳು. ಈ ಮನಸ್ಸೆಂಬುದು "ಭಾವನೆಗಳಿಗೆ" ಹಿಡಿದ ಕನ್ನಡಿ ಮತ್ತು ಒಬ್ಬ ಮನುಷ್ಯನ ಗುಣಗಳಿಗೆ ಇರುವ ಕೈಪಿಡಿ. ವಿವಿಧ ಭಾವನೆಗಳಿಂದ ರೂಪಗೊಂಡವನೆ ಮನುಷ್ಯ. ಹಾಗಾಗಿ ಇಲ್ಲಿ "ನಾನು" ಎಂಬ ಪದದ ಅರ್ಥ "ಭಾವನೆ" ಎಂಬುದು. ಹೇಗೆ, ಕನ್ನಡಿಯಲ್ಲಿ ಅದರ ಮುಂದಿರುವ ವಸ್ತುವಿನ ಆಕಾರ ಮತ್ತು ಅದರ ಹಿಂದಿನ ವಸ್ತುಗಳು ಕಾಣುವುದೊ, ಹಾಗೆ ಈ ಮನಸ್ಸೆಂಬ ಕನ್ನಡಿಯಲ್ಲಿ ಕಾಣುವುದು ಭಾವನೆ ಮತ್ತು ಅದರ ಹಿಂದಿರುವ ನೆನಪುಗಳು ಮಾತ್ರ. ಹಾಗಾಗಿ ಇಲ್ಲಿ "ಭಾವಕನ್ನಡಿ" ಎಂಬುದರ ಅರ್ಥ "ಮನಸ್ಸು" ಎಂಬುದು!
ಸೋಮವಾರ, ನವೆಂಬರ್ 07, 2011
ಆಲದ ಮರ
ದೂರದಿಂದ ನೋಡಿದೆ ಅಲ್ಲಿ, ನಿಂತಿದ್ದರು ನಾಲ್ವರು ಕುಳಿತಿದ್ದರು ಮಗದೊಬ್ಬರು,
ಆ ಮೂವರು ನಿಂತದ್ದು ಕಂಡಿತು ಅಶ್ವತ ಕಟ್ಟೆಯ ಮುಂದೆ ನಿಂತ ಭಕ್ತರ ಹಾಗೆ,
ಆಲದ ಮರದಂತಿದ್ದ ಕುಳಿತಿದ್ದವರ ಮಾತುಗಳ ಕೇಳುತ್ತ ಎಲ್ಲರು ಮಂತ್ರಮುಗ್ಧರು,
ಬಿಸಿಲಿನಿಂದ ಒಣಗಿದವಗೆ ನೆರಳು ಸಿಕ್ಕಂತಾಯಿತು ಅವರನ್ನು ನೋಡಿ ನನಗೆ.
ನಾನೂ ಅಲ್ಲಿಗೆ ಹೋಗಿ ಆ ಆಲದ ಮರಕ್ಕೆ ಭಕ್ತಿಯಿಂದ ಕೈ ಮುಗಿಯಬೇಕೆನಿಸಿತು,
ತಡಮಾಡಲಿಲ್ಲ ಒಂದು ಕ್ಷಣವು ಕೂಡ, ಹೋಗಿ ನಿಂತೆ ಆ ಪುಣ್ಯಾತ್ಮರ ಎದುರು,
ಮನದ ಮಾತಗಳನ್ನು ಪದಗಳಲಿ ಸೆರೆಹಿಡಿದ ಕೈ, ಕಾಲಿಗೆರಗಿದ ನನ್ನನು ಆಶೀರ್ವದಿಸಿತು,
ಆ ಕಣ್ಗಳಲಿ ಇನ್ನೂ ಬತ್ತದ ಉತ್ಸಾಹ, ಮಾತುಗಳಲ್ಲಿ ಕುಗ್ಗದ ಭಾವಗಳ ನವಿರು.
ಆ ಮರದಡಿಯಲ್ಲಿ ಯಾರೇ ನಿಂತರೂ ಮೂಡೂವುದು ಅವರಲ್ಲಿ ಕಾವ್ಯದ ಚಿಗುರು,
ಆಶಯವೊಂದೇ.. ಚಿರವಾಗಿರಲಿ ಆ ಮರವು, ಚಿರಂತನವಾಗಲಿ ಅದರ ಕೃತಿಗಳೆಂಬ ಬೇರು!!!
ನಿತ್ಯೋತ್ಸವದ ಮಹಾನ್ ಕವಿ ನಿಸಾರ್ ಅಹ್ಮದ್ ಅವರನ್ನು ಭೇಟಿ ಮಾಡಿದ ಸಂದರ್ಭ :)
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ