ಸೋಮವಾರ, ನವೆಂಬರ್ 07, 2011

ಆಲದ ಮರ


ದೂರದಿಂದ ನೋಡಿದೆ ಅಲ್ಲಿ, ನಿಂತಿದ್ದರು ನಾಲ್ವರು ಕುಳಿತಿದ್ದರು ಮಗದೊಬ್ಬರು,
ಆ ಮೂವರು ನಿಂತದ್ದು ಕಂಡಿತು ಅಶ್ವತ ಕಟ್ಟೆಯ ಮುಂದೆ ನಿಂತ ಭಕ್ತರ ಹಾಗೆ,
ಆಲದ ಮರದಂತಿದ್ದ ಕುಳಿತಿದ್ದವರ ಮಾತುಗಳ ಕೇಳುತ್ತ ಎಲ್ಲರು ಮಂತ್ರಮುಗ್ಧರು,
ಬಿಸಿಲಿನಿಂದ ಒಣಗಿದವಗೆ ನೆರಳು ಸಿಕ್ಕಂತಾಯಿತು ಅವರನ್ನು ನೋಡಿ ನನಗೆ.

ನಾನೂ ಅಲ್ಲಿಗೆ ಹೋಗಿ ಆ ಆಲದ ಮರಕ್ಕೆ ಭಕ್ತಿಯಿಂದ ಕೈ ಮುಗಿಯಬೇಕೆನಿಸಿತು,
ತಡಮಾಡಲಿಲ್ಲ ಒಂದು ಕ್ಷಣವು ಕೂಡ, ಹೋಗಿ ನಿಂತೆ ಆ ಪುಣ್ಯಾತ್ಮರ ಎದುರು,
ಮನದ ಮಾತಗಳನ್ನು ಪದಗಳಲಿ ಸೆರೆಹಿಡಿದ ಕೈ, ಕಾಲಿಗೆರಗಿದ ನನ್ನನು ಆಶೀರ್ವದಿಸಿತು,
ಆ ಕಣ್ಗಳಲಿ ಇನ್ನೂ ಬತ್ತದ ಉತ್ಸಾಹ, ಮಾತುಗಳಲ್ಲಿ ಕುಗ್ಗದ ಭಾವಗಳ ನವಿರು.

ಆ ಮರದಡಿಯಲ್ಲಿ ಯಾರೇ ನಿಂತರೂ ಮೂಡೂವುದು ಅವರಲ್ಲಿ ಕಾವ್ಯದ ಚಿಗುರು,
ಆಶಯವೊಂದೇ.. ಚಿರವಾಗಿರಲಿ ಆ ಮರವು, ಚಿರಂತನವಾಗಲಿ ಅದರ ಕೃತಿಗಳೆಂಬ ಬೇರು!!!

ನಿತ್ಯೋತ್ಸವದ ಮಹಾನ್ ಕವಿ ನಿಸಾರ್ ಅಹ್ಮದ್ ಅವರನ್ನು ಭೇಟಿ ಮಾಡಿದ ಸಂದರ್ಭ :)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ