
ಪ್ರೀತಿಯ ಕನ್ನಡಿಗರು ನಾವು ಕನ್ನಡಿಗರೆಂಬ ಹೆಮ್ಮೆ ನಮಗಿರಲಿ,
ಕನ್ನಡವನ್ನು ಬೆಳೆಸೋಣ, ನಮ್ಮೆಲ್ಲರಲ್ಲಿ ಕನ್ನಡವು ಸದಾ ನಲಿದಾಡಲಿ.
ಕನ್ನಡದ ನೆಲದಿ ತಲೆಯೆತ್ತಿ ಬೀಗಿ ನಡೆದರು ಅದೆಷ್ಟೊ ವೀರರು,
ಈ ಮಣ್ಣಿನ ಸೊಗಡನ್ನು ಅನಾವರಣಗೊಳಿಸಿದರು ಈ ನಾಡಿನ ಕವಿವರ್ಯರು.
ಕನ್ನಡದಲ್ಲಿ ಒಂದು ಪದವನ್ನಾಡಿದರೂ ಅದು ಸುಮಧುರ ಸ್ವರದಂತೆ,
ಈ ನೆಲದಿ ಜನ್ಮ ಪಡೆದಿರುವುದು, ನಮಗೆ ಆ ದೇವರು ಕೊಟ್ಟಿರುವ ವರವಂತೆ!
ಕನ್ನಡ ರಾಜ್ಯೋತ್ಸವವೆಂಬುದು ಆಗದಿರಲಿ ಒಂದು ದಿನದ ಸಡಗರವಾಗಿ,
ಕನ್ನಡವಾಗಲಿ ಚಿರಂತನ, ಹಾರುತಿರಲಿ ಕನ್ನಡದ ಬಾವುಟ ನಿರಂತರವಾಗಿ.
ಎಲ್ಲರಿಗು ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
ಜೈ ಕರ್ನಾಟಕ ಮಾತೆ!!!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ