ಭಾನುವಾರ, ಜನವರಿ 15, 2012

ಸಂಕ್ರಾಂತಿ



ಮಂಜಿನ ಹೊದಿಕೆಯ ಸರಿಸುತ ಮೇಲೆದ್ದ ಮೂಡಣದ ರವಿ,
ಮೂಡಿದ ಹೊಂಗಿರಣಗಳ ನಡುವೆ ಹೊಳೆಯಿತು ನಮ್ಮೀ ಭುವಿ.

ಹಬ್ಬದ ದಿನವಿದು, ಸುಳಿದಾಡಿದೆ ಎಲ್ಲೆಲ್ಲೂ ಸಡಗರ ಸಂಭ್ರಮದ ವಾತಾವರಣ,
ರಂಗೋಲಿ, ಹಸಿರು ತೋರಣದಿ ಸಿಂಗರಿಸಿಕೊಂಡಿವೆ ಪ್ರತಿ ಮನೆಯ ಆವರಣ.

ಜೀವನದ ಕಹಿಯ ಬಡಿದು ಓಡಿಸಲಿ ಕಬ್ಬಿನ ಸಿಹಿ,
ಮನದಲ್ಲಿ ಒಳಿತನ್ನು ಮೂಡಿಸಲಿ ಎಳ್ಳು-ಬೆಲ್ಲದ ಸವಿ.

ಎಲ್ಲರಲ್ಲೂ ಹೊಸ ಚೈತನ್ಯದ ಕಿರಣಗಳ ಮೂಡಿಸಲಿ ಉತ್ತರಾಯಣ,
ನಿಮಗೆಲ್ಲರಿಗೂ ಸುಖ-ಶಾಂತಿಯ ತರಲಿ ಈ ಮಕರ ಸಂಕ್ರಮಣ.

ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು!!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ