
ನೀನಂದು ಆ ಮಹಿಷಾಸುರನ ಕೊಂದು ಲೋಕದಲ್ಲಿ ಶಾಂತಿಯ ನೆಲಸಿದೆ,
ಅಂತೆಯೇ, ನಮ್ಮಲ್ಲಿ ಅಡಗಿರುವ ರಕ್ಕಸನನ್ನು ನೀನಿಂದು ಹೊರಗೆಳೆದು ಕೊಲ್ಲಬೇಕಿದೆ||
ದುಷ್ಟ ಶಕ್ತಿಗಳ ನಿಗ್ರಹಿಸಿ ಶಿಷ್ಟರನ್ನು ಉಳಿಸುವ ನೀನು ಮಹಾಮಾಯೆ,
ನಾವೆಲ್ಲರೂ ನಿನ್ನ ಮಕ್ಕಳಲ್ಲವೆ, ತಪ್ಪಾಗಿದ್ದರೆ ಕ್ಷಮಿಸಿ ಕಾಪಾಡು ಓ ತಾಯೆ||
ನಿನ್ನ ಕೃಪಾಕಟಾಕ್ಷ ನಮ್ಮ ಮೇಲಿದ್ದರೆ, ಸಾರ್ಥಕ ನಮ್ಮ ಭಕ್ತಿಯ ಪರಿ,
ನಮ್ಮಲ್ಲಿ ಸುಖ-ನೆಮ್ಮದಿ ಸದಾ ನೆಲಸುವಂತೆ ಮಾಡು, ಕರುನಾಡ ಚಾಮುಂಡೇಶ್ವರಿ||
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ