
ಈಗಷ್ಟೇ ಮುಗಿದಿದೆ ರಂಗು - ರಂಗಿನ ದೀಪವಳಿ,
ಎಲ್ಲೆಡೆ ಬೆಳಕಿದ್ದರೂ ನನ್ನೊಳಗೆ ಮಾತ್ರ ಖಾಲಿ ಖಾಲಿ.
ನೆಂಟರಿಷ್ಟರೆಲ್ಲಾ ಸೇರಿ ಮನೆಯನ್ನು ಆವರಿಸಿತ್ತು ಹಬ್ಬದ ಸಡಗರ,
ಹೀಗಿದ್ದರೂ ನಾನಾಗಿದ್ದೆ ಒಂಟಿ, ಮೂಡಿತ್ತು ಮನದಲ್ಲಿ ಬೇಸರ.
ಸಿಹಿಯಾಗಿರಲಿಲ್ಲ ಕಜ್ಜಾಯ, ಯೋಚಿಸಿದೆ ಏನೆಂದು ಕಾರಣ,
ತಿಳಿಯಿತು ನೀನಿರಲಿಲ್ಲವೆಂದು ಅದಕ್ಕೆ ತಪ್ಪಿತು ಪ್ರೀತಿಯ ಹೂರಣ.
ಸದ್ದು ಮಾಡುವ ಪಟಾಕಿಗಳಿಂದ ತುಂಬಿತ್ತ ನನ್ನ ಹೊರಗಿನ ಆವರಣ,
ಸದ್ದಿದ್ದರೂ ನನ್ನೊಳಗಿತ್ತು ಮೌನ, ನನ್ನೆದೆಯ ಆವರಣವು ಭಣ - ಭಣ.
ನೀ ನನ್ನ ಜೊತೆಯಲ್ಲಿದ್ದರೆ, ನನಗೆ ಪ್ರತಿ ದಿನವೂ ಬೆಳಗುವ ದೀಪಾವಳಿ,
ಹೋಗಲಾಡಿಸಿ ನನ್ನ ದುಃಖವ, ತೊಡಿಸು ಬಾ ಮನಕೆ ನಿನ್ನ ಪ್ರೀತಿಯ ಪ್ರಭಾವಳಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ