ಮಂಗಳವಾರ, ಅಕ್ಟೋಬರ್ 25, 2011

ದೀಪಾವಳಿ


ಜಡ ಮನದ ಮೂಲೆಯ ಸೇರದಿರು ಓ ಮನುಜ,
ನಿನ್ನ ಪ್ರಪಂಚದಿಂ ಹೊರ ಬಂದು ನೋಡು ಬೆಳಕು ತುಂಬಿದ ಪ್ರಕೃತಿಯ.
ಕತ್ತಲ ಹಾದಿಯಲ್ಲಿ ನಡೆದು ಮನಸ್ಸು ಕೊಳೆಯುವುದು ಸಹಜ,
ಪ್ರೀತಿಯ ಬೆಳಕಿನಿಂದ ಎಲ್ಲೆಲ್ಲೂ ಮೂಡಿಸು ಸಹಬಾಳ್ವೆಯ ಸುಕೃತಿಯ.

ಆಶಿಸೋಣ ಕರಗಲೆಂದು ಎಲ್ಲರಲ್ಲಿರುವ ಅಂಧಕಾರದ ಕಾರ್ಮೋಡ,
ಕರಗಿ ಬೆಳಕಿನ ಮಳೆಯಾಗಿ ತೋಳೆದುಬಿಡಲಿ ಕೊಳಕು ತುಂಬಿದ ಬುದ್ಧಿಯನು.
ಆಚರಿಸೋಣ ದೀಪಾವಳಿಯ ಸದಾ ಗುನುಗುತ್ತ ಸಂತಸ-ಸಂಭ್ರಮಗಳ ಹಾಡ,
ದೀಪಗಳ ಹಾವಳಿಯು ತೊಲಗಿಸಿ ಕತ್ತಲನು ನೀಡಲಿ ಎಲ್ಲರಿಗು ಮನದ ಶುದ್ಧಿಯನು.

ಎಲ್ಲರಿಗೂ ದೀಪಾವಳಿಯ ಶುಭಾಶಯಗಳು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ