ಶುಕ್ರವಾರ, ಅಕ್ಟೋಬರ್ 07, 2011

ನಿಜ


ತಾಯಿಯ ಗರ್ಭದಿಂದ ಹುಟ್ಟು ಪಡೆಯುವುದಾದರೆ ನಿಜ,
ಕೊನೆಗೆ, ಭೂ ಮಾತೆಯ ಒಡಲ ಸೇರುವುದು ಅಷ್ಟೇ ಸಹಜ||

ಕೆಲವರೆನ್ನುವರು ಜೀವನವೆಂಬುದು ನಾಲ್ಕು ದಿನಗಳ ಜಂಜಾಟ,
ಆದರೆ ನನಗನಿಸುತ್ತದೆ ಇದು ನೋವು-ನಲಿವುಗಳ ಕಣ್ಣಾ-ಮುಚ್ಚಾಲೆ ಆಟ||

ಬಲ್ಲಿದನಾಗಿದ್ದರೆ ಬಡವರಿಗೆ ಸಹಾಯ ಹಸ್ತವ ನೀಡು,
ಇಲ್ಲದಿದ್ದರೆ ಯಾರ ಹಂಗಿಲ್ಲದೆ ಮೇಲೇಳುವ ದಾರಿಯ ನೀ ನೋಡು||

ಸುಖವೇ ಆಗಲಿ ದುಃಖವೇ ಆಗಲಿ ಇಲ್ಲುಂಟು ಕೊನೆ,
ಪಯಣ ಮುಗಿದ ಮೇಲೆ ಎಲ್ಲರಿಗೂ ದಕ್ಕುವುದು ಅದೇ ಮಣ್ಣಿನರಮನೆ!!!

ಹೀಗಿರುವಾಗ, ಎಲ್ಲದಕ್ಕೂ ಕೊನೆಯೊಂದಿದೆ ಎಂದು ನೀ ತಿಳಿದರೆ,
ಸಂತಸ, ನೆಮ್ಮದಿಗಳಿಂದ ಕೂಡಿ ಕಂಗೊಳಿಸುತ್ತದೆ ನಮ್ಮೀ ಧರೆ||

ಸರ್ವೇ ಜನಃ ಸುಖಿನೋ ಭವಂತು...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ