
ತಾಯಿಯ ಗರ್ಭದಿಂದ ಹುಟ್ಟು ಪಡೆಯುವುದಾದರೆ ನಿಜ,
ಕೊನೆಗೆ, ಭೂ ಮಾತೆಯ ಒಡಲ ಸೇರುವುದು ಅಷ್ಟೇ ಸಹಜ||
ಕೆಲವರೆನ್ನುವರು ಜೀವನವೆಂಬುದು ನಾಲ್ಕು ದಿನಗಳ ಜಂಜಾಟ,
ಆದರೆ ನನಗನಿಸುತ್ತದೆ ಇದು ನೋವು-ನಲಿವುಗಳ ಕಣ್ಣಾ-ಮುಚ್ಚಾಲೆ ಆಟ||
ಬಲ್ಲಿದನಾಗಿದ್ದರೆ ಬಡವರಿಗೆ ಸಹಾಯ ಹಸ್ತವ ನೀಡು,
ಇಲ್ಲದಿದ್ದರೆ ಯಾರ ಹಂಗಿಲ್ಲದೆ ಮೇಲೇಳುವ ದಾರಿಯ ನೀ ನೋಡು||
ಸುಖವೇ ಆಗಲಿ ದುಃಖವೇ ಆಗಲಿ ಇಲ್ಲುಂಟು ಕೊನೆ,
ಪಯಣ ಮುಗಿದ ಮೇಲೆ ಎಲ್ಲರಿಗೂ ದಕ್ಕುವುದು ಅದೇ ಮಣ್ಣಿನರಮನೆ!!!
ಹೀಗಿರುವಾಗ, ಎಲ್ಲದಕ್ಕೂ ಕೊನೆಯೊಂದಿದೆ ಎಂದು ನೀ ತಿಳಿದರೆ,
ಸಂತಸ, ನೆಮ್ಮದಿಗಳಿಂದ ಕೂಡಿ ಕಂಗೊಳಿಸುತ್ತದೆ ನಮ್ಮೀ ಧರೆ||
ಸರ್ವೇ ಜನಃ ಸುಖಿನೋ ಭವಂತು...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ